Friday 26 March 2021

ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ *ಪ್ರಶ್ನೋತ್ತರಮಾಲಿಕಾ*, ಬದುಕಿನಲ್ಲಿ ಏನನ್ನು ಮಾಡಬೇಕ, ಏನನ್ನು ಮಾಡಬಾರದೆಂದು ಬಹಳ ಸುಂದರ , ಸರಳವಾಗಿ ತಿಳಿಸುತ್ತದೆ..

 ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ  
*ಪ್ರಶ್ನೋತ್ತರಮಾಲಿಕಾ*, ಬದುಕಿನಲ್ಲಿ ಏನನ್ನು ಮಾಡಬೇಕಏನನ್ನು ಮಾಡಬಾರದೆಂದು ಬಹಳ ಸುಂದರ , ಸರಳವಾಗಿ ತಿಳಿಸುತ್ತದೆ..

 

ಪ್ರಶ್ನೆಭಗವನ್ ಕಿಮ್ ಉಪಾದೇಯಮ್..? 

ಪೂಜ್ಯರೇ ಜೀವನದಲ್ಲಿ 

ಏನನ್ನು ಅನುಸರಿಸಬೇಕು ? 

ಉತ್ತರ - *ಗುರುವಚನಮ್* 

ಜೀವನದಲ್ಲಿ ಗುರು-ಹಿರಿಯರ 

ಮಾತನ್ನು ಅನುಸರಿಸಬೇಕು. 

 

ಪ್ರಶ್ನೆ - ಕಃ ಪಥ್ಯತರಃ ? 

ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ? 

ಉತ್ತರ - *ಧರ್ಮಃ* 

ಧರ್ಮವೇ ಹಿತಕರವಾದದ್ದು. 

 

ಪ್ರಶ್ನೆ - ಕಿಮ್ ವಿಷಮ್ ? 

ಯಾವುದು ವಿಷ ? 

ಉತ್ತರ - *ಅವಧೀರಣಾ ಗುರುಷು* 

ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ. 

 

ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ? 

ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ 

ಯಾವುದು ? 

ಉತ್ತರ - *ಸ್ವಪರಹಿತಾಯ ಉದ್ಯತಂ ಜನ್ಮಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ 

ಜೀವನವನ್ನು ತೊಡಗಿಸಿಕೊಳ್ಳುವುದು. 

 

ಪ್ರಶ್ನೆ - ಕೇ  ದಸ್ಯವಃ ? 

ಕಳ್ಳರು ಯಾರು ? 

ಉತ್ತರ - *ವಿಷಯಾಃ* 

ಸುಖಪಭೋಗ 

ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ 

ಮನಸನ್ನು 

ಅಪಹರಿಸುತ್ತವೆ ) 

 

ಪ್ರಶ್ನೆ - ಕೋ ವೈರೀ ? 

ನಮ್ಮ ಶತ್ರು ಯಾರು ? 

ಉತ್ತರ - *ಯಸ್ತು ಅನುದ್ಯೋಗಃ* 

ನಿರುದ್ಯೋಗವೇ ನಮ್ಮ ಶತ್ರು. 

 

ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ? 

ಶ್ರೇಷ್ಠತೆಯ ಮೂಲ ಯಾವುದು ? 

ಉತ್ತರ - *ಯತ್ ಏತತ್ ಅಪ್ರಾರ್ಥನಮ್ ನಾಮಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ 

ಶ್ರೇಷ್ಠತೆ 

 

ಪ್ರಶ್ನೆ - ಕಿಮ್ ದುಃಖಮ್ ? 

ದುಃಖವೆಂದರೇನು..? 

ಉತ್ತರ - *ಅಸಂತೋಷಃ* 

ಸಂತೋಷವನ್ನು ಕಳೆದುಕೊಂಡಾಗಿನ ಅವಸ್ಥೆ. 

 

ಪ್ರಶ್ನೆ - ಕಿಮ್ ಜಾಡ್ಯಮ್ ? 

ಆಲಸ್ಯತನವು ಯಾವುದು ? 

ಉತ್ತರ - *ಪಾಠತೋSಪಿ ಅನಭ್ಯಾಸಃ* 

ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು , ಅಧ್ಯಯನ 

ಮಾಡದಿರುವುದು. 

 

ಪ್ರಶ್ನೆ - ನಲಿನೀ-ದಲ-ಗತ-ಜಲವತ್-ತರಲಂ  

ಕಿಮ್ ? 

ಕಮಲದ ಎಲೆಯ ಮೇಲಿನ ನೀರಿನಂತೆ 

ಚಂಚಲವಾದದ್ದು ಯಾವುದು ? 

ಉತ್ತರ - *ಯೌವ್ವನಂ - ಧನಂ  ಆಯುಃ* 

ತಾರುಣ್ಯ,ಸಂಪತ್ತು ಮತ್ತು ಆಯುಷ್ಯ 

ಇವು ಕಮಲದ ಎಲೆ ಮೇಲಿನ ನೀರಿನಂತೆ 

ಚಂಚಲವಾದವುಗಳು. 

 

ಪ್ರಶ್ನೆ - ಕಿಮ್  ಅನರ್ಘಮ್ ? 

ಬೆಲೆ ಕಟ್ಟಲಾಗದ್ದು ಯಾವುದು ? 

ಉತ್ತರ - *ಯದವಸರೇ ದತ್ತಮ್* 

ಸರಿಯಾದ ಸಮಯದಲ್ಲಿ ಸತ್ಪಾತ್ರರಿಗೆ ದಾನ ಮಾಡಿದ್ದು. 

 

ಪ್ರಶ್ನೆ - ಆಮರಣಾತ್ ಕಿಮ್ ಶಾಲ್ಯಮ್ ? 

ಸಾಯುವವರೆಗೂ ಬಾಣದಂತೆ 

ಚುಚ್ಚುತ್ತಲೇ ಇರುವುದು ಯಾವುದು ? 

ಉತ್ತರ - *ಪ್ರಚ್ಛನ್ನಂ ಯತ್ ಕೃತಂ ಪಾಪಮ್* 

ಬಚ್ಚಿಟ್ಟುಕೊಂಡ ಪಾಪಕಾರ್ಯ 

ಸಾಯುವವರೆಗೂ ಬಾಣದಂತೆ 

ಚುಚ್ಚತ್ತಲೇ ಇರುತ್ತದೆ . 

 

ಪ್ರಶ್ನೆ - ಕುತ್ರ ವಿಧೇಯೋ ಯತ್ನಃ ? 

ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ? 

ಉತ್ತರ - *ವಿದ್ಯಾಭ್ಯಾಸೇ ಸದೌಷಧೇ ದಾನೇ* 

ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ 

ಮತ್ತು ದಾನ ಮಾಡುವಲ್ಲಿ ಪ್ರಯತ್ನ 

ಮಾಡಬೇಕು.. 

 

ಪ್ರಶ್ನೆ - ಕೇನ ಜಿತಂ ಜಗದೇತತ್ ? 

 ಜಗತ್ತನ್ನು ಯಾರು ಗೆಲ್ಲುತ್ತಾರೆ ? 

ಉತ್ತರ - *ಸತ್ಯ-ತಿತಿಕ್ಷಾವತಾ ಪುಂಸಾ* 

ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು  

ಜಗತ್ತನ್ನು ಗೆಲ್ಲುತ್ತಾನೆ. 

 

ಪ್ರಶ್ನೆ - ಕಸ್ಯ ವಶೇ ಪ್ರಾಣಿಗಣಃ ? 

ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ? 

ಉತ್ತರ - *ಸತ್ಯ-ಪ್ರಿಯಭಾಷಿಣೋ ವಿನೀತಸ್ಯ* 

ಪ್ರಾಣಿ 

ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ 

ವಿನಯಶಾಲಿಯ ವಶದಲ್ಲಿ ಇರುತ್ತದೆ. 

 

ಪ್ರಶ್ನೆ - ಕ್ವ ಸ್ಥಾತವ್ಯಮ್ ? 

ಎಲ್ಲಿ ಸ್ಥಿರವಾಗಿ ನಿಲ್ಲಬೇಕು ? 

ಉತ್ತರ - *ನ್ಯಾಯ್ಯೇ ಪಥಿ ದೃಷ್ಟ - ಅದೃಷ್ಟ -* 

*ಲಾಭಾಢ್ಯೇ* 

ದೃಷ್ಟ ಮತ್ತು ಅದೃಷ್ಟ 

(ಕಂಡು ಕಾಣದ )ಲಾಭದಿಂದ ಸಮೃದ್ಧವಾದ 

ನ್ಯಾಯಯುತವಾದ 

ಮಾರ್ಗದಲ್ಲಿ ಸದಾ ನಿಲ್ಲಬೇಕು. 

 

ಪ್ರಶ್ನೆ - ಕಿಮ್ ದಾನಮ್ ? 

ದಾನವು ಯಾವುದು ? 

ಉತ್ತರ - *ಅನಾಕಾಂಕ್ಷಮ್* 

ಪ್ರತಿಫಲವನ್ನು ಬಯಸದೇ ಮಾಡಿದ 

ದಾನವೇ ನಿಜವಾದ ದಾನವು . 

 

ಪ್ರಶ್ನೆ - ಕಿಮ್ ಮಿತ್ರಮ್ ? 

ನಿಜವಾದ ಮಿತ್ರನು ಯಾರು ? 

ಉತ್ತರ - *ಯೋ ನಿವಾರಯತಿ ಪಾಪಾತ್* 

ಪಾಪ ಕಾರ್ಯಗಳನ್ನು ಮಾಡದಂತೆ 

ತಡೆಯುವನು ನಿಜವಾದ ಮಿತ್ರನು. 

 

ಪ್ರಶ್ನೆ - ಕಿಮ್ ಶೋಚ್ಯಮ್ ? 

ದುಃಖಕರವಾದುದು ಯಾವುದು ? 

ಉತ್ತರ - *ಕಾರ್ಪಣ್ಯಮ್* 

ದಾರಿದ್ರ್ಯವು (ಬಡತನವುಕಷ್ಟಕರವಾದದ್ದು.. 

 

ಪ್ರಶ್ನೆ - ಕಃ ಪರಿಹರ್ಯೋ ದೇಶಃ ? 

ಎಂತಹ ದೇಶದಿಂದ ದೂರ ಇರಬೇಕು ? 

ಉತ್ತರ - *ಪಿಶುನಯುತೋ ಲುಬ್ಧಭೂಪಶ್ಚ* 

ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ 

ರಾಜನುಳ್ಳ ದೇಶವನ್ನು ತೊರೆಯಬೇಕು. 

 

ಪ್ರಶ್ನೆ - ಇಹ ಭುವನೇ ಕೋ ಶೋಚ್ಯಃ ? 

ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ? 

ಉತ್ತರ - *ಸತ್ಯಪಿ ಭುವನೇ ಯೋ  ದಾತಾ* 

ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ. 

 

ಪ್ರಶ್ನೆ - ಕಿಮಹರ್ನಿಶಂ ಅನುಚಿಂತ್ಯಮ್ ? 

ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ? 

ಉತ್ತರ - *ಭಗವಚ್ಚರಣಮ್  ಸಂಸಾರಃ* 

ಹಗಲಿರುಳು ಪರಮಾತ್ಮನ ಚರಣದ ಚಿಂತೆ 

ಮಾಡಬೇಕೇ ವಿನಃ ಸಂಸಾರವನ್ನಲ್ಲ . 

 

ಪ್ರಶ್ನೆ - ಕಿಮ್ ಸಂಪಾದ್ಯಂ ಮನುಜೈಃ ? 

ಮಾನವರು ಏನನ್ನು ಸಂಪಾದಿಸಬೇಕು ? 

ಉತ್ತರ - *ವಿದ್ಯಾ , ವಿತ್ತಮ್ , ಬಲಂ , ಯಶಃಪುಣ್ಯಮ್* 

ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ 

ಮತ್ತು ಪುಣ್ಯಗಳನ್ನು ಸಂಪಾದಿಸಬೇಕು . 

 

ಪ್ರಶ್ನೆ - ಕಃ ಸರ್ವಗುಣವಿನಾಶೀ ? 

ಎಲ್ಲ 

ಗುಣಗಳನ್ನು ನಾಶಪಡಿಸುವಂಥಹದು ಯಾವುದು ? 

ಉತ್ತರ - *ಲೋಭಃ* 

ಲೋಭವು ಸರ್ವ ಗುಣಗಳನ್ನು ನಾಶ 

ಪಡಿಸುವಂತಹದು. 

 

ಪ್ರಶ್ನೆ - ಶತ್ರುಶ್ಚ ಕಃ ? 

ವೈರಿಯು ಯಾರು ? 

ಉತ್ತರ - *ಕಾಮಃ* 

ಕಾಮವೇ ವೈರಿಯು . 

 

ಪ್ರಶ್ನೆ - ಕಾ ಸುರಕ್ಷ್ಯಾ 

ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ? 

ಉತ್ತರ - *ಕೀರ್ತಿಃ , ಪತಿವ್ರತಾ , ನೈಜಬುದ್ಧಿಶ್ಚ* 

ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ 

ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ . 

 

ಪ್ರಶ್ನೆ - ಕಾ ಕಲ್ಪವೃಕ್ಷಃ ಲೋಕೇ ? 

ಜಗತ್ತಿನ್ನಲ್ಲಿ ಕಲ್ಪವೃಕ್ಷ ಯಾವುದು ? 

(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ವೃಕ್ಷ) 

ಉತ್ತರ - *ಸಚ್ಛಿಷ್ಯಾರ್ಪಿತ ವಿದ್ಯಾ* 

ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು 

ಜಗತ್ತಿನಲ್ಲಿ ಕಲ್ಪವೃಕ್ಷವಾಗುತ್ತದೆ. 

 

ಪ್ರಶ್ನೆ - ಪಾತಕಂ  ಕಿಮ್ ? 

ಪಾತಕವು ಯಾವುದು ? 

ಉತ್ತರ - *ಹಿಂಸಾ* 

ಹಿಂಸೆಯೇ(ಕ್ರೂರತೆಪಾತಕವು. 

 

ಪ್ರಶ್ನೆ - ಸಂಭಾವಿತಸ್ಯ ಮರಣಾತ್ ಅಧಿಕಂ ಕಿಮ್ ? 

ಒಳ್ಳೆಯವನಿಗೆ ಸಾವಿಗಿಂತಲೂ 

ಹೆಚ್ಚು ದುಃಖದಾಯಕ ಯಾವುದು ? 

ಉತ್ತರ - *ದುರ್ಯಶೋ ಭವತಿ* 

ಅಪಕೀರ್ತಿಯು ಮರಣಕ್ಕಿಂತಲೂ 

ಹೆಚ್ಚು ದುಃಖದಾಯಕ. 

 

ಪ್ರಶ್ನೆ - ಕೋ ವರ್ಧತೇ ? 

ಯಾರು ಪ್ರಗತಿ ಯನ್ನು ಹೊಂದುತ್ತಾರೆ ? 

ಉತ್ತರ - *ವಿನೀತಃ* 

ವಿನಮ್ರ ನಾದವನು (ವಿನಯಶಾಲಿಯು ) 

ಪ್ರಗತಿಯನ್ನು ಹೊಂದುತ್ತಾನೆ . 

 

ಪ್ರಶ್ನೆ - ಕಿಮ್ ಭಾಗ್ಯಂ ದೇಹವತಾಮ್ ? 

ದೇಹಿಗಳಿಗೆ (ಮನುಷ್ಯರಿಗೆ) 

ಭಾಗ್ಯವು ಯಾವುದು ? 

ಉತ್ತರ - *ಆರೋಗ್ಯಮ್* 

ಆರೋಗ್ಯವೇ ಭಾಗ್ಯವು . 

 

ಪ್ರಶ್ನೆ - ಕೋ ಜಗದ್ಭರ್ತಾ ? 

ಜಗತ್ತಿನ ಸಂರಕ್ಷಕನ್ಯಾರು ? 

ಉತ್ತರ - *ಸೂರ್ಯಃ* 

ಸೂರ್ಯ. 

 

ಪ್ರಶ್ನೆ - ಸರ್ವೇಷಾಂ ಕೋ ಜೀವನಹೇತುಃ ? 

ಎಲ್ಲರ ಬದುಕಿಗೆ ಕಾರಣನು ಯಾರು ? 

ಉತ್ತರ - * ಪರ್ಜನ್ಯಃ* 

ಪರ್ಜನ್ಯನು (ಮಳೆ ) ಎಲ್ಲರ ಬದುಕಿಗೆ ಕಾರಣನು . 

 

ಪ್ರಶ್ನೆ - ಕಃ ಶೂರಃ ? 

ಶೂರನು ಯಾರು ? 

ಉತ್ತರ - *ಯೋ ಭೀತತ್ರಾತಾ* 

ಭೀತನಾದವನನ್ನು ಕಾಪಾಡುವವನು ಶೂರನು . 

 

ಪ್ರಶ್ನೆ - ತ್ರಾತಾ  ಕಃ ? 

ಮತ್ತೆ ಕಾಪಾಡುವವನು ಯಾರು ? 

ಉತ್ತರ - * ಗುರುಃ* 

ಗುರುವೇ ಕಾಪಾಡುವವನು. 

 

ಪ್ರಶ್ನೆ - ಪ್ರತ್ಯಕ್ಷದೇವತಾ ಕಾ ? 

ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ? 

ಉತ್ತರ - *ಮಾತಾ* 

ತಾಯಿಯೇ ಪ್ರತ್ಯಕ್ಷ ದೇವತೆಯು . 

 

ಪ್ರಶ್ನೆ - ಪೂಜ್ಯೋ ಗುರುಶ್ಚ ಕಃ ? 

ಪೂಜ್ಯ ಗುರುವು ಯಾರು ? 

ಉತ್ತರ - *ತಾತಃ* 

ತಂದೆಯೇ ಪೂಜ್ಯ ಗುರುವು . 

 

ಪ್ರಶ್ನೆ - ಪಾತ್ರಂ ಕಿಮ್ ಅನ್ನದಾನೇ ? 

ಅನ್ನದಾನಕ್ಕೆ ಅರ್ಹನಾರು ? 

ಉತ್ತರ - *ಕ್ಷುಧಿತಮ್* 

ಹಸಿದವನು ಅನ್ನದಾನಕ್ಕೆ ಅರ್ಹನು . 

 

*ಲೋಕಾಃ ಸಮಸ್ತಾಃ ಸುಖಿನೋ ಭವಂತು.* 

*ಶ್ರೀ ರಾಮ ಜಯರಾಮ ಜಯಜಯ ರಾಮ.*